ಮೈಸೂರಿನ ಸೈಯದ್ ಇಸಾಕ್ ಅವರು ನಿರ್ಮಿಸಿದ್ದ ಗ್ರಂಥಾಲಯವು ಬೆಂಕಿಗೆ ಆಹುತಿಯಾಗಿ ಏ.9ಕ್ಕೆ ಒಂದು ವರ್ಷವಾಗಲಿದೆ. ವ್ಯಕ್ತಿಯೊಬ್ಬನ ನಿರ್ಲಕ್ಷ್ಯದಿಂದ ಸುಟ್ಟು ಕರಕಲಾಗಿದ್ದ ಈ ಗ್ರಂಥಾಲಯ ವರ್ಷದೊಳಗೇ ಬೂದಿಯಿಂದ ಮೇಲೆದ್ದಿದೆ. ಕನ್ನಡಿಗರ ಇಚ್ಛಾಶಕ್ತಿ, ಕನ್ನಡದ ಪ್ರೀತಿಯ ಸಂಕೇತವಾಗಿ ಓದುಗರನ್ನು ಮತ್ತೆ ಸ್ವಾಗತಿಸುತ್ತಿದೆ.