ರಾಮನಗರ: ಲಸಿಕೆಗೆ ಆತುರ, ಚಿಕಿತ್ಸೆಗೆ ಆತಂಕ ಲಸಿಕೆ ಕೇಂದ್ರಗಳ ಮುಂದೆ ಗಂಟೆಗಟ್ಟಲೆ ಕಾದು ವಾಪಸ್ ಆಗುವ ಸಾರ್ವಜನಿಕರು ಒಂದೆಡೆ, ಮತ್ತೊಂದೆಡೆ ಆಸ್ಪತ್ರೆ ಸೇರಬೇಕು ಎಂಬ ಆತಂಕದಿಂದ ಪರೀಕ್ಷೆಗೇ ಹಿಂದೇಟು ಹಾಕುವ ಗ್ರಾಮೀಣ ಜನರು. ಈ ಮಧ್ಯೆ ಹಳ್ಳಿಗಳನ್ನು ತಲುಪದ ಆಂಬುಲೆನ್ಸ್ ಸೇವೆ... ಇದು ರೇಷ್ಮೆಗೆ ಹೆಸರುವಾಸಿಯಾದ ರಾಮನಗರ ಜಿಲ್ಲೆಯ ಸದ್ಯದ ಕೋವಿಡ್ ಚಿತ್ರಣ.