ಶಿವಮೊಗ್ಗ: ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಗಡಿಯಲ್ಲಿ ನೂರಕ್ಕೂ ಅಧಿಕ ದಿನಗಳಿಂದ ನಡೆಯುತ್ತಿರುವ ಹೋರಾಟ ಈಗ ದಕ್ಷಿಣದ ರಾಜ್ಯಗಳತ್ತಲೂ ಪಸರಿಸುತ್ತಿದೆ. ದಕ್ಷಿಣದತ್ತ ಸಾಗುತ್ತಿರುವ ರೈತರ ಹೋರಾಟದ ಕಿಚ್ಚಿಗೆ ಮಲೆನಾಡು ಶಿವಮೊಗ್ಗ ಹೆಬ್ಬಾಗಿಲಾಗಿದೆ. ಶಿವಮೊಗ್ಗದಲ್ಲಿ ನಡೆದ ರೈತ ಹೋರಾಟದ ಒಂದು ವರದಿ ಇಲ್ಲಿದೆ.