ಉತ್ತರ ಕನ್ನಡ ಜಿಲ್ಲೆಯ ಮುರ್ಕವಾಡ ಗ್ರಾಮದಲ್ಲಿ ಮನೆಯ ಗೋಡೆ ಕುಸಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ. ರುಕ್ಮಿಣಿ ವಿಠ್ಠಲ ಮಾಚಕ (37) ಹಾಗೂ ಶ್ರೀದೇವಿ ವಿಠ್ಠಲ ಮಾಚಕ (13) ಮೃತರು. ಘಟನೆ ನಡೆದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಪ್ರಕಾಶ ಗಾಯಕವಾಡ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿ ಕುಟುಂಬಕ್ಕೆ ತುರ್ತು ಪರಿಹಾರ ವಿತರಿಸಿದ್ದಾರೆ.