ಬರವಣಿಗೆಯಲ್ಲಿ ಶಕ್ತಿ ಇರುವ ಹೊಸಬರನ್ನು ಹುಡುಕುತ್ತಿದ್ದ ಪುಟ್ಟಣ್ಣ ಕಣಗಾಲ್ ಅವರು ತಮ್ಮ ನಿರ್ದೇಶನದ 'ಧರಣಿ ಮಂಡಲ ಮಧ್ಯದೊಳಗೆ' ಚಿತ್ರಕ್ಕೆ ಪ್ರೇಮಗೀತೆ ಬರೆಸಲು ಕವಿ ಸಿದ್ಧಲಿಂಗಯ್ಯ ಅವರನ್ನು ಆರಿಸಿಕೊಂಡರು. ಟಿ.ಎನ್. ಸೀತಾರಾಂ ಪ್ರೀತಿಯ ಒತ್ತಾಯಕ್ಕೆ ಮಣಿದು ಆದಿತ್ಯ ಎಂಬ ಹೆಸರಿನಲ್ಲಿ ಸಿದ್ಧಲಿಂಗಯ್ಯನವರು 'ಗೆಳತಿ ಓ ಗೆಳತಿ' ಹಾಡು ಬರೆದುಕೊಟ್ಟರು. ಅದಕ್ಕೆ ರಾಜ್ಯ ಚಲನಚಿತ್ರ ಪ್ರಶಸ್ತಿ ಬಂದುಬಿಟ್ಟಿತು. ಆಮೇಲೆ ಅವರೇ ಬರೆದದ್ದು ಎನ್ನುವ ಗುಟ್ಟು ರಟ್ಟಾಯಿತು. ಈ ಕವಿಸಮಯವೂ ಆಸಕ್ತಿಕರವಾದದ್ದು.