ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕು ಎನ್ನುವ ಒಂದೇ ಉದ್ದೇಶದಿಂದ ಅಧಿಕಾರಕ್ಕೆ ಬಂದ ಮೈತ್ರಿ ಸರ್ಕಾರದ ಚುಕ್ಕಾಣಿ ಹಿಡಿದವರು ಎಚ್.ಡಿ.ಕುಮಾರಸ್ವಾಮಿ. ಒಂದೆಡೆ ಸರ್ಕಾರ ಉಳಿಸಿಕೊಳ್ಳಬೇಕಾದ ಒತ್ತಡ, ಇನ್ನೊಂದೆಡೆ ಆಡಳಿತ ನಿರ್ವಹಿಸುವ ಹೊಣೆಗಾರಿಕೆ, ಇದರ ಮೇಲೆ ಮೈತ್ರಿಧರ್ಮ ಪಾಲನೆ ಎನ್ನುವ ಹಗ್ಗದ ಮೇಲಿನ ನಡಿಗೆ. ಇದೀಗ ಮಗನನ್ನು ಲೋಕಸಭೆಗೆ ಕಳಿಸಲು ಸಿದ್ಧರಾಗಿರುವ ಕುಮಾರಸ್ವಾಮಿ ಅವರಿಗೆ ಚುನಾವಣೆ ಹೊಸಿಲಲ್ಲಿ ಹಂಚಿಕೊಳ್ಳಲು ಎಷ್ಟೆಲ್ಲಾ ವಿಷಯಗಳಿವೆ.