ಮಥುರಾ: ಪ್ರಿಯಕರನ ಜೊತೆ ಸೇರಿ ಕುಟುಂಬದ 7 ಮಂದಿಯನ್ನು ಕೊಂದಿದ್ದ ಮಥುರಾದ ಶಬ್ನಂ ಅವರಿಗೆ ಕ್ಷಮಾದಾನ ನೀಡುವಂತೆ ಕೋರಿ ಅವರ ಪುತ್ರ ಮೊಹಮ್ಮದ್ ತಾಜ್ ರಾಷ್ಟ್ರಪತಿ ರಾಮನಾಥ್ ಕೋವಿಂದ್ಗೆ ಮನವಿ ಮಾಡಿದ್ದಾರೆ. ಸ್ಲೇಟ್ ಹಿಡಿದು, ನಾನು ನನ್ನ ಅಮ್ಮನನ್ನು ತುಂಬಾ ಪ್ರೀತಿಸುತ್ತೇನೆ. ಅವರ ಮರಣದಂಡನೆ ರದ್ದು ಮಾಡಿ ಕ್ಷಮಾದಾನ ನೀಡಿ ಪ್ರೆಸಿಡೆಂಟ್ ಅಂಕಲ್ ಎಂದು ಮನವಿ ಮಾಡಿದ್ದಾನೆ.