ಪಶ್ಚಿಮ ಬಂಗಾಳದಲ್ಲಿ ದಿನದಿಂದ ದಿನಕ್ಕೆ ಚುನಾವಣಾ ಕಾವು ಏರತೊಡಗಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಬಿಜೆಪಿಯ ನಂದಿಗ್ರಾಮ ಅಭ್ಯರ್ಥಿ ಸುವೇಂಧು ಅಧಿಕಾರಿ ನಡುವಣ ಪೈಪೋಟಿ ತೀವ್ರಗೊಂಡಿದೆ. ಈ ಮಧ್ಯೆ, ಮಮತಾ ಅವರ ನಂದಿಗ್ರಾಮದ ನಿವಾಸದ ಎದುರು ‘ನಂದಿಗ್ರಾಮಕ್ಕೆ ಇಲ್ಲಿನ ಪುತ್ರ ಸಾಕು, ಹೊರಗಿನವರು ಬೇಡ’ ಎಂಬ ಬ್ಯಾನರ್ ಹಾಕಲಾಗಿದೆ.