ಗುಲಬರ್ಗಾ ವಿಶ್ವವಿದ್ಯಾಲಯವು ಕನ್ಹಯ್ಯಕುಮಾರ್ ಉಪನ್ಯಾಸಕ್ಕೆ ಸೋಮವಾರ ಅನುಮತಿ ನೀಡಿತ್ತು. ಮಂಗಳವಾರ ವಿ.ವಿ.ಹಂಗಾಮಿ ಕುಲಪತಿ ಪ್ರೊ. ಪರಿಮಳಾ ಅಂಬೇಕರ್ ಅವರು ದಿಢೀರ್ ಅನುಮತಿ ನಿರಾಕರಿಸಿರುವುದನ್ನು ಪ್ರಕಟಿಸಿದರು. ವಿದ್ಯಾರ್ಥಿಗಳು ಪಟ್ಟು ಬಿಡದೆ ಕಾರ್ಯಕ್ರಮವನ್ನು ವಿಶ್ವೇಶ್ವರಯ್ಯ ಸಭಾಂಗಣಕ್ಕೆ ಸ್ಥಳಾಂತರಿಸಿದರು. ಆದರೆ, ಪೊಲೀಸರ ಮಧ್ಯ ಪ್ರವೇಶದಿಂದ ಅಲ್ಲಿಯೂ ಕಾರ್ಯಕ್ರಮ ರದ್ದಾಯಿತು. ಸುದ್ದಿ ವಿವರ: https://bit.ly/2IQMHzf