ಸಿದ್ದರಾಮಯ್ಯ ಕುರಿತಾದ ವಿವಾದಾತ್ಮಕ ಹೇಳಿಕೆಗೆ ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಖಂಡ್ರೆಗೆ ಕುಳಿತುಕೊಳ್ಳಲು ಸೂಚಿಸಿದ ಸ್ಪೀಕರ್, ಇದು ನಿಮಗೆ ಶೋಭೆ ತರಲ್ಲ. ಈ ರೀತಿ ಮಾತನಾಡುವುದು ಗೌರವ ತರಲ್ಲ. ನಿಮ್ಮನ್ನು ಯಾರು ಆಯ್ಕೆ ಮಾಡೋರು, ಆಯ್ಕೆ ಮಾಡಿದರೆ ವ್ಯವಸ್ಥೆಗೆ ಅಗೌರವ ಎಂದು ತೀಕ್ಷ್ಣವಾಗಿ ಆಕ್ಷೇಪ ವ್ಯಕ್ತಪಡಿಸಿದರು. ಖಂಡ್ರೆಗೆ ಖಡಕ್ ಎಚ್ಚರಿಕೆ ಕೊಟ್ಟ ಸ್ಪೀಕರ್ , ಹಿರಿಯರು ನಡೆದುಕೊಳ್ಳುವ ರೀತಿ ಏನು? ಇನ್ನೊಂದು ಹೆಜ್ಜೆ ಮುಂದಾದರೆ ಹೊರಗಡೆ ಹಾಕಬೇಕಾಗುತ್ತೆ ಎಂದು ಎಚ್ಚರಿಕೆ. ನಿಮಗೆ ಮಾತ್ರ ಬಿಪಿ ಎರೋದಾ ನನಗೆ ಏರಲ್ವಾ? ಎಂದು ಪ್ರಶ್ನಿಸಿದರು.
ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್ಬುಕ್ನಲ್ಲಿ ಲೈಕ್ ಮಾಡಿ.
ಟ್ವಿಟರ್ನಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಚಾನೆಲ್ ನೋಡಿ..