ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ತಮ್ಮ ಚೊಚ್ಚಲ ಬಜೆಟ್ ಮಂಡಿಸಿದ್ದಾರೆ. ಈ ಬಜೆಟ್ ಮೂಲಕ ನವಕರ್ನಾಟಕ ನಿರ್ಮಾಣದ ಉದ್ದೇಶವಿದೆ ಎಂಬುದನ್ನು ತೋರಿಸಿದರೂ, ಅದನ್ನು ಕಾರ್ಯರೂಪಕ್ಕೆ ತರುವಂತಹ ಮಾರ್ಗಗಳ ಉಲ್ಲೇಖವಿಲ್ಲ. ವರ್ಷಾಂತ್ಯಕ್ಕೆ ಎದುರಾಗಲಿರುವ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸಾಲ ಮಾಡಿಯೇ ಎಲ್ಲರನ್ನೂ ಓಲೈಸುವ, ಬಿಜೆಪಿಯ ಕಡೆಗೆ ಅವರನ್ನು ಸೆಳೆಯುವ ಕಸರತ್ತು ಈ ಬಜೆಟ್ನಲ್ಲಿ ಕಾಣಿಸುತ್ತದೆ. ಅಲ್ಲದೆ, ಇತ್ತೀಚೆಗೆ, ಪಕ್ಷಕ್ಕೆ ಆದ ರಾಜಕೀಯ ಹಿನ್ನಡೆಯನ್ನು ಮರೆಸುವಂತಹ ಕ್ರಮಗಳನ್ನೂ ಘೋಷಿಸಿದ್ದಾರೆ ಬಸವರಾಜ ಬೊಮ್ಮಾಯಿ.