ಈ ಬಾರಿ ರಾಜ್ಯದಲ್ಲಿ ಒಂದು ತಿಂಗಳು ತಡವಾಗಿ ಮಾವಿನ ಹಂಗಾಮು ಆರಂಭ ಆಗಿದ್ದು, ಮಾರುಕಟ್ಟೆಗೆ ಲಗ್ಗೆ ಇಡಲು ಹಣ್ಣು ಸಿದ್ಧವಾಗಿದೆ. ಆದರೆ ಈ ವರ್ಷ ಇಳಿ ಹಂಗಾಮು ಇರುವ ಕಾರಣಕ್ಕೆ ಇಳುವರಿ ಕುಸಿದಿದ್ದು, ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟುವ ಸಾಧ್ಯತೆ ಹೆಚ್ಚಿದೆ. ಮಾವು ಬೆಳೆಗಾರರು ಇಷ್ಟೆಲ್ಲ ಸಂಕಷ್ಟ ಅನುಭವಿಸುತ್ತಿರುವ ನಡುವೆಯೇ, ಮಾವಿಗೂ ಧರ್ಮದ ನಂಟು ಅಂಟಿಸುವ ಪ್ರಯತ್ನ ನಡೆದಿದ್ದರಿಂದ ಮತ್ತಷ್ಟು ಕಂಗಾಲಾಗಿದ್ದಾರೆ.