ಕಲಬುರಗಿ ಚಿತ್ತಾಪುರ ತಾಲ್ಲೂಕಿನ ಲಾಡ್ಲಾಪುರದಲ್ಲಿರುವ ಈ ದರ್ಗಾ ಹಿಂದೂ ಮುಸ್ಲಿಮರ ಭಾವೈಕ್ಯ ಕೇಂದ್ರ. ಇಲ್ಲಿನ ಸಂತರನ್ನು ಮುಸ್ಲಿಮರು ಹಾಜಿ ಸರ್ವರ್ ಎಂದು ಕರೆದರೆ, ಹಿಂದೂಗಳು ಹಾದಿ ಶರಣ ಎಂದು ಆರಾಧಿಸುತ್ತಾರೆ. ಕೋಮು ಗಲಾಟೆಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ ಈ ಚಿಕ್ಕ ಹಳ್ಳಿ ಇಡೀ ದೇಶಕ್ಕೆ ಮಾದರಿ ಎಂದರೆ ಅತಿಶಯೋಕ್ತಿಯಲ್ಲ.