ಶಿವಮೊಗ್ಗದಲ್ಲಿ ಮಾರ್ಚ್ 20ರಂದು ಮಧ್ಯಾಹ್ನ 3ಕ್ಕೆ ರೈತರ ಮಹಾ ಪಂಚಾಯತ್ ಆರಂಭವಾಗಲಿದೆ. ‘ಪ್ರತಿಯೊಬ್ಬರೂ ರೈತ ಹೋರಾಟದ ದೀಕ್ಷೆ ತೊಟ್ಟಿದ್ದೇವೆ’ ಎಂದು ಘೋಷಿಸಿರುವ ಜಿಲ್ಲೆಯ ರೈತ ಮುಖಂಡರು, ತಾವು ಒಗ್ಗೂಡುವ ಜತೆಗೆ ಬಿಜೆಪಿಯೇತರ ರಾಜಕೀಯ ಪಕ್ಷಗಳು, ವಿವಿಧ ಸಂಘಟನೆಗಳ ಮುಖಂಡರನ್ನೂ ಮಹಾ ಪಂಚಾಯತ್ ವೇದಿಕೆಗೆ ಸೆಳೆಯುವಲ್ಲಿ ಯಶ ಕಂಡಿದ್ದಾರೆ. ಅದಕ್ಕಾಗಿ ಸತತ ತಿಂಗಳಿನಿಂದ ಹಳ್ಳಿ ಹಳ್ಳಿ ತಿರುಗಿ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಸಂಯುಕ್ತ ಕಿಸಾನ್ ಮೋರ್ಚಾ ನಾಯಕರಾದ ಡಾ.ದರ್ಶನ ಪಾಲ್, ರಾಕೇಶ್ ಟಿಕಾಯತ್, ಯದುವೀರ್ ಸಿಂಗ್ ಭಾಗವಹಿಸುತ್ರಿದ್ದಾರೆ.