ಒಂದು ಊರಿನ ಮಹಿಳೆಯರಿಗೆ ಅಲ್ಲಿನ ಒಳ್ಳೆಯ ಡಾಕ್ಟರು ಬೇಡ. ಇನ್ನೊಂದು ಊರಿನ ಮಹಿಳೆಯರಿಗೆ ಅಲ್ಲಿಯ ಬೀದಿ ದೀಪಗಳನ್ನು ಕಂಡರೆ ಸಿಟ್ಟು. ಆ ಡಾಕ್ಟರನ್ನು ಊರಿನಿಂದ ಟ್ರಾನ್ಸ್ಪರ್ ಮಾಡಿಸಲು ಹೋರಾಟ ಮಾಡಿದರು ಅಲ್ಲಿಯ ಹೆಣ್ಣುಮಕ್ಕಳು. ಇನ್ನೊಂದು ಊರಿನ ಹೆಣ್ಣುಮಕ್ಕಳು ಅಲ್ಲಿಯ ಬೀದಿ ದೀಪಗಳನ್ನು ಒಡೆದು ಹಾಕಿದರು. ವಿಚಿತ್ರವಾದರೂ ಸತ್ಯವಾದ ಈ ಘಟನೆಗಳ ಹಿಂದಿನ ಕಾರಣ ಮಾತ್ರ ನಮ್ಮ ದೇಶದ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿತ್ತು. ಅದು ಏನು ಎಂಬುದನ್ನು ‘ಪ್ರಜಾವಾಣಿ' ಕಾರ್ಯನಿರ್ವಾಹಕ ಸಂಪಾದಕ, ರವೀಂದ್ರ ಭಟ್ಟ ಅವರು ಇಲ್ಲಿ ವಿವರಿಸಿದ್ದಾರೆ.