ಪತ್ರಿಕೆಗಳು ಜನರ ಜ್ಞಾನದ ದಾಹವನ್ನು ತೀರಿಸುವ ಸುಲಭ ಸಾಧನ. ಅಂತಹ ಪತ್ರಿಕೆಗಳನ್ನು ಓದಲು ಹಿಂದೆ ಜನರು ಹಳ್ಳಿಗಳಲ್ಲಿ ಮಾಡುತ್ತಿದ್ದ ಹಲವು ಸಾಹಸಗಳು ಬಹಳ ರೋಚಕವಾಗಿರುತ್ತಿತ್ತು. ತಮ್ಮ ಊರಿಗೆ ಪತ್ರಿಕೆ ಬಾರದೇ ಇರಲು ಬಸ್ ಇಲ್ಲದಿರುವುದನ್ನು ಅರ್ಥಮಾಡಿಕೊಂಡವರೊಬ್ಬರು ಮಾಡಿದ ಸಾಹಸವೇನು? ಆ ಊರಿಗೆ ಪತ್ರಿಕೆ ಬರಲು ಏನು ಮಾಡಿದರೆಂದು ‘ಪ್ರಜಾವಾಣಿ' ಕಾರ್ಯನಿರ್ವಾಹಕ ಸಂಪಾದಕ, ರವೀಂದ್ರ ಭಟ್ಟ ಅವರು ಇಲ್ಲಿ ವಿವರಿಸಿದ್ದಾರೆ.