ಬೆಂಗಳೂರು: ವಲಸೆ ಕಾರ್ಮಿಕರಿಂದ ಒಂದು ಕಡೆಯ ಪ್ರಯಾಣದ ಟಿಕೆಟ್ ದರ (One Way ticket) ಮಾತ್ರ ಪಡೆಯಬೇಕೆಂದು ಮುಖ್ಯಮಂತ್ರಿಗಳು ಆದೇಶಿಸಿದ್ದರೂ ಕೆಎಸ್ಆರ್ಟಿಸಿ ಎರಡು–ಮೂರು ಪಟ್ಟು ಹೆಚ್ಚಿನ ಹಣ ಪಡೆಯುತ್ತಿದೆ ಎಂಬ ಆರೋಪ ವ್ಯಕ್ತವಾಗಿದೆ. ಈ ಮಧ್ಯೆ, ಹಣ ಹೊಂದಿಸಲಾಗದೆ ಕಾರ್ಮಿಕರು ಪರದಾಡುವಂತಾಗಿದೆ. ಒಂದೂವರೆ ತಿಂಗಳಿಂದ ಕೆಲಸ ಇಲ್ಲದೆ ಬೆಂಗಳೂರಿನಲ್ಲೇ ಉಳಿದಿದ್ದ ಕಾರ್ಮಿಕರು ಊರಿಗೆ ಹೋಗಲು ಪರದಾಡುತ್ತಿದ್ದಾರೆ. – ಪ್ರಜಾವಾಣಿ ವಿಡಿಯೊ: ಕೃಷ್ಣಕುಮಾರ್ ಪಿ.ಎಸ್.