ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Watch| ವಿಷ್ಣುವರ್ಧನ್ ಕುರಿತ ತೆಲುಗು ನಟ ವಿಜಯ್ ರಂಗರಾಜು ಹೇಳಿಕೆಗೆ ಕಿಚ್ಚ ಸುದೀಪ್ ಆಕ್ರೋಶ

Last Updated 13 ಡಿಸೆಂಬರ್ 2020, 8:54 IST
ಅಕ್ಷರ ಗಾತ್ರ

ವಿಷ್ಣುವರ್ಧನ್ ಕುರಿತ ತೆಲುಗು ನಟ ವಿಜಯ್ ರಂಗರಾಜು ಹೇಳಿಕೆಗೆ ಸುದೀಪ್ ಆಕ್ರೋಶ

ಏನು ಹೇಳಿದ್ದಾರೆ ಕಿಚ್ಚ

'ನಟ ವಿಜಯ್‌ ರಂಗರಾಜು ಅವರು ವಿಷ್ಣುವರ್ಧನ್‌ ಅವರ ಬಗ್ಗೆ ಬಹಳ ಕೇವಲವಾಗಿ ಮಾತನಾಡಿದ ವಿಡಿಯೊ ನೋಡಿದೆ. ಕಲಾವಿದನಾಗಿ, ವಿಷ್ಣುವರ್ಧನ್‌ ಅವರ ಅಭಿಮಾನಿಯಾಗಿ, ಎಲ್ಲ ಅಭಿಮಾನಿಗಳ ಪರವಾಗಿ ನಾನು ಈಗ ಮಾತನಾಡುತ್ತಿದ್ದೇನೆ. ವಿಜಯ್‌ ರಂಗರಾಜು ಅವರೇ ವ್ಯಕ್ತಿ ಬಗ್ಗೆ ಮಾತನಾಡುವುದು ನಿಮಗೆ ಬಿಟ್ಟ ವಿಚಾರ. ಆದರೆ, ಅವರು ಬದುಕಿರುವಾಗ ಮಾತನಾಡುವುದರಲ್ಲಿ ಗಂಡಸ್ತನ ಇರುತ್ತದೆ. ಆಗ ಸತ್ಯದ ಬಗ್ಗೆ ಇಬ್ಬರೂ ಮಾತನಾಡಬಹುದಿತ್ತು. ಆದರೆ, ವಿಷ್ಣುವರ್ಧನ್‌ ಅವರು ಇಲ್ಲದಿರುವ ಈ ಸಂದರ್ಭದಲ್ಲಿ ಅವರ ವಿರುದ್ಧ ಹೇಳಿಕೆ ಕೊಡುವುದು ಬಹಳ ದೊಡ್ಡ ತಪ್ಪು. ಎಲ್ಲ ಸಿನಿಮಾ ರಂಗಗಳೂ ಒಟ್ಟಾಗಿ ನಡೆಯುತ್ತಿರುವ ಈ ಸಂದರ್ಭದಲ್ಲಿ ನಿಮ್ಮಂಥ ಒಬ್ಬ ವ್ಯಕ್ತಿ ಈ ರೀತಿಯ ಹೇಳಿಕೆ ನೀಡುವುದರಿಂದ ಎಲ್ಲವೂ ಚೂರು ಚೂರಾಗಿ ಒಡೆದು ಹೋಗುತ್ತವೆ,' ಎಂದು ಹೇಳಿದ್ದಾರೆ.

'ಕನ್ನಡ ಸಿನಿಮಾ ರಂಗದವರು ಎಲ್ಲ ಸಿನಿಮಾ ರಂಗಗಳಿಗೂ ಗೌರವ, ಪ್ರೀತಿ ನೀಡುತ್ತಿರುವ ಸಂದರ್ಭದಲ್ಲಿ ನೀವು ವಿಷ್ಣುವರ್ಧನ್‌ ಅವರ ಮಾತನಾಡಿರುವುದನ್ನು ತೆಲುಗು ಸಿನಿಮಾರಂಗದವರೇ ಒಪ್ಪುವುದಿಲ್ಲ. 'ವಿಷ್ಣುವರ್ಧನ್‌ ಅವರಿಗೆ ಎಚ್ಚರಿಕೆ ನೀಡಿದ್ದೆ, ನಿನ್ನದೇನಿದ್ದರೂ ಬೆಂಗಳೂರಿನಲ್ಲಿ ಇಟ್ಟುಕೋ ಎಂದು ಹೇಳಿದ್ದೆ,' ಎಂದೆಲ್ಲ ಹೇಳಿದ್ದೀರಿ. ಆ ಹಂತಕ್ಕೆ ಹೋಗಬೇಡಿ. ವಿಷ್ಣುವರ್ಧನ್‌ ಇವತ್ತು ಇಲ್ಲದಿರಬಹುದು. ನಾವೆಲ್ಲರೂ ಇನ್ನೂ ಇದ್ದೇವೆ. ಉದ್ಯಮದಲ್ಲಿ ಎಲ್ಲರೂ ಚೆನ್ನಾಗಿದ್ದಾರೆ. ನಿಮ್ಮೊಬ್ಬರಿಂದ ಎಲ್ಲವೂ ಹಾಳಾಗುವುದು ಬೇಡ. ಎಚ್ಚರಿಕೆ ಕೊಡುವ ಮಟ್ಟಕ್ಕೆ ಇಳಿಯಬೇಡಿ. ಇಲ್ಲಿ ಯಾರೂ ಕೈಲಾಗದವರು ಇಲ್ಲ. ಕೋಟಿ ಕೋಟಿ ಮಕ್ಕಳನ್ನು ವಿಷ್ಣುವರ್ಧನ್‌ ಇಲ್ಲಿ ಬಿಟ್ಟು ಹೋಗಿದ್ದಾರೆ. ನಮಗೆ ಎಚ್ಚರಿಕೆ ನೀಡಬೇಡಿ. ನೀವು ಮಾತಾಡಿರುವ ಮಾತನ್ನು ವಾಪಸ್‌ ಪಡೆಯಿರಿ,' ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಮತ್ತಷ್ಟು ವಿಡಿಯೊಗಳಿಗಾಗಿ: ಯೂಟ್ಯೂಬ್‌ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ ವೆಬ್‌ಸೈಟ್‌ ನೋಡಿ
ಫೇಸ್‌ಬುಕ್‌: ಲೈಕ್ ಮಾಡಿ
ಟ್ವಿಟರ್‌: ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ: ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT