ಥೆರೆಸಾ ಮಾರ್ಚ್ನಲ್ಲಿ ಭಾರತಕ್ಕೆ ಪ್ರವಾಸ ಬಂದವರು. ಉತ್ತರ ಭಾರತದ ಹಲವು ಸ್ಥಳಗಳಲ್ಲಿ ಸುತ್ತಾಡಿ, ಕರಾವಳಿಗೆ ಬರುವ ಹೊತ್ತಿಗೆ ಲಾಕ್ಡೌನ್ ಘೋಷಣೆಯಾಯ್ತು. ಅಂತರ ರಾಷ್ಟ್ರೀಯ ವಿಮಾನಗಳ ಹಾರಾಟ ರದ್ದಾಗಿದ್ದರಿಂದ ಸ್ವದೇಶಕ್ಕೆ ತೆರಳಲಾಗದೆ ಸಂಕಷ್ಟಕ್ಕೆ ಸಿಲುಕಿದರು. ಈ ಸಂದರ್ಭ ಥೆರೆಸಾ ನೆರವಿಗೆ ಬಂದಿದ್ದು ಬೈಂದೂರು ತಾಲ್ಲೂಕಿನ ಹೇರಂಜಾಲು ಗ್ರಾಮದ ಕೃಷ್ಣ ಪೂಜಾರಿ.