ಹಟ್ಟಿಚಿನ್ನದ ಗಣಿ (ರಾಯಚೂರು): ಜಿಲ್ಲೆಯ ಹಟ್ಟಿ ಸಮೀಪ ಗೊಲಪಲ್ಲಿ ಗ್ರಾಮದ ಗುಂಡ್ಲಬಂಡಾ ಜಲಪಾತದಲ್ಲಿ ಗುರುವಾರ ದಿಢೀರ್ ನೀರು ಹೆಚ್ಚಳ ಆಗಿದ್ದರಿಂದ ಬಾಲಕ ಸೇರಿ ನಾಲ್ಕು ಜನರು ಕೊಚ್ಚಿ ಹೋಗುವಾಗ ಇಬ್ಬರು ಪಾರಾಗಿದ್ದಾರೆ.
ಇನ್ನಿಬ್ಬರು ಕಣ್ಮರೆಯಾಗಿದ್ದು, ಹುಡುಕಾಟ ಮುಂದುವರಿದಿದೆ.
ಎಲ್ಲರೂ ದೇವದುರ್ಗ ತಾಲ್ಲೂಕಿನ ಮೂಡಲಗುಂಡ ಗ್ರಾಮದವರು. ಸಿದ್ದಣ್ಣ ಈಜಿ ಹೊರಬಂದಿದ್ದು, ಮಹಾಂತೇಶನನ್ನು ಪೊಲೀಸರು ರಕ್ಷಿಸಿದ್ದಾರೆ. 35 ವರ್ಷದ ಕೃಷ್ಣಪ್ಪ ಮತ್ತು 5 ವರ್ಷದ ಧನುಷ್ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಶೋಧ ನಡೆದಿದೆ.