ರಾಜಾ, ಕನಿಮೊಳಿ ಅವರಲ್ಲದೆ, ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಅವರ ಹೆಂಡತಿ ದಯಾಳು ಅಮ್ಮಾಳ್ ಸೇರಿ 17 ಆರೋಪಿಗಳನ್ನು ದೋಷಮುಕ್ತಗೊಳಿಸಿ ವಿಶೇಷ ನ್ಯಾಯಾಲಯವು ಕಳೆದ ಡಿಸೆಂಬರ್ 21ರಂದು ತೀರ್ಪು ನೀಡಿತ್ತು. ಸ್ವಾನ್ ಟೆಲಿಕಾಂ ಪ್ರೈ. ಲಿ.ನ (ಎಸ್ಟಿಪಿಎಲ್) ಪ್ರವರ್ತಕರಾದ ಶಾಹಿದ್ ಬಲ್ವಾ ಮತ್ತು ವಿನೋದ್ ಗೋಯೆಂಕಾ, ಕುಸೆಗಾಂವ್ ಫ್ರೂಟ್ಸ್ ಆಂಡ್ ವೆಜಿಟೆಬಲ್ಸ್ ಪ್ರೈ.ಲಿ. ನ ಆಸಿಫ್ ಬಲ್ವಾ ಮತ್ತು ರಾಜೀವ್ ಅಗರ್ವಾಲ್, ಸಿನಿಮಾ ನಿರ್ಮಾಪಕ ಕರೀಮ್ ಮೊರಾನಿ, ಕಲೈಗನಾರ್ ಟಿವಿಯ ನಿರ್ದೇಶಕ ಶರದ್ ಕುಮಾರ್ ಪ್ರಕರಣದ ಇತರ ಮುಖ್ಯ ಆರೋಪಿಗಳಾಗಿದ್ದರು.