‘ನಂದಪ್ಪ ಅವರ ಮಗ ಮಲ್ಲಪ್ಪನಿಗೆ ಕೆಲ ದಿನಗಳ ಹಿಂದೆ ನಾನಾಗೌಡ ಪಾಟೀಲ ಎಂಬುವವರಟ್ರ್ಯಾಕ್ಟರ್ ಡಿಕ್ಕಿ ಹೊಡೆದು ಗಂಭೀರ ಗಾಯಗಳಾಗಿದ್ದವು. ಗ್ರಾಮದಲ್ಲಿ ನ್ಯಾಯ ಪಂಚಾಯಿತಿ ನಡೆಸಿ, ಮಲ್ಲಪ್ಪನ ಚಿಕಿತ್ಸೆಗಾಗಿ ಹಣ ನೀಡುವ ಭರವಸೆ ನೀಡಲಾಗಿತ್ತು. ಅದರಂತೆ ನಂದಪ್ಪ ಅವರು ಹಣ ಕೇಳಲು ಶನಿವಾರ ಸಂಜೆ ಹೋದಾಗ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ’ ಎಂದು ಸಂಬಂಧಿಕರು ಆರೋಪಿಸಿದರು.