ಚಂಡಮಾರುತದ ತೀವ್ರತೆಗೆ ದ್ವೀಪರಾಷ್ಟ್ರದ ಬಹುತೇಕ ಪಟ್ಟಣಗಳು ಗುರಿಯಾಗಿವೆ. 10 ಜನ ನಾಪತ್ತೆಯಾಗಿದ್ದು, 13 ಮಂದಿ ಗಾಯಗೊಂಡಿದ್ದಾರೆ. ಸಂಪರ್ಕ ಕೊರತೆಯಿಂದ ಇನ್ನೂ 33 ಮೇಯರ್ಗಳು ವಸ್ತುಸ್ಥಿತಿ ವರದಿ ಕಳುಹಿಸಿಲ್ಲ. ಹೀಗಾಗಿ, ಮೃತರ ಸಂಖ್ಯೆ ಇನ್ನಷ್ಟು ಏರಬಹುದು ಎಂದು ಗವರ್ನರ್ ಅರ್ತುರ್ ಯಾಪ್ ತಿಳಿಸಿದ್ದಾರೆ.