ಲಂಡನ್: ಅಫ್ಗಾನಿಸ್ತಾನದಿಂದ ಪಲಾಯನ ಮಾಡಲು ಕಾಬೂಲ್ ವಿಮಾನ ನಿಲ್ದಾಣದತ್ತ ಬರುತ್ತಿರುವವರನ್ನು ಗುರಿಯಾಗಿರಿಸಿ ಉಗ್ರರು ದಾಳಿ ನಡೆಸಲು ಯೋಜಿಸುತ್ತಿರುವುದಾಗಿ ಬ್ರಿಟನ್ ರಕ್ಷಣಾ ಸಚಿವ ಜೇಮ್ಸ್ ಹೆಪ್ಪಿ ಆತಂಕ ವ್ಯಕ್ತಪಡಿಸಿದ್ದಾರೆ.
ಇಂಗ್ಲೆಂಡ್ ವಿದೇಶಾಂಗ ಇಲಾಖೆಯು, ʼಅಫ್ಗಾನಿಸ್ತಾನದಲ್ಲಿನ ಭದ್ರತಾ ಪರಿಸ್ಥಿತಿಯು ಅತಂತ್ರವಾಗಿದೆ. ಭಯೋತ್ಪಾದಕರ ದಾಳಿ ಬೆದರಿಕೆ ಇರುವುದರಿಂದಕಾಬೂಲ್ನ ಹಮೀದ್ ಕರ್ಜೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದತ್ತ ತೆರಳದಿರಿ. ಒಂದು ವೇಳೆ ನೀವು ವಿಮಾನ ನಿಲ್ದಾಣದ ಪ್ರದೇಶದಲ್ಲಿದ್ದರೆ, ಸುರಕ್ಷಿತ ಪ್ರದೇಶಗಳತ್ತ ತೆರಳಿ. ಮುಂದಿನ ಸೂಚನೆಗಳು ಬರುವವರೆಗೆ ಅಲ್ಲಿಯೇ ಇರಿʼ ಎಂದು ಬುಧವಾರ ತಡರಾತ್ರಿ ಸೂಚನೆ ನೀಡಿತ್ತು.
ಈಸಂಬಂಧ ಬಿಬಿಸಿ ರೆಡಿಯೊಗೆ ಮಾತನಾಡಿರುವ ಸಚಿವ,ʼಅತ್ಯಂತ ವಿಶ್ವಾಸಾರ್ಹʼ ಗುಪ್ತಚರ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.ಐಎಸ್ ಸಂಘಟನೆ ಉಗ್ರರು ಆತ್ಮಾಹುತಿ ಬಾಂಬ್ ದಾಳಿ ನಡೆಸಲಿದ್ದಾರೆಎಂಬುದು ಖಚಿತವಾಗಲಿದೆʼ ಎಂದಿದ್ದಾರೆ.
ʼಸಂಭವನೀಯ ದಾಳಿಯ ಬಗ್ಗೆ ನಂಬಲರ್ಹವಾದ ವರದಿ ಇದೀಗ ಲಭ್ಯವಾಗಿದೆ. ಅದಕ್ಕಾಗಿಯೇ ವಿದೇಶಾಂಗ ಇಲಾಖೆಯು ಜನರು ವಿಮಾನ ನಿಲ್ದಾಣದತ್ತ ಬರಬಾರದು ಮತ್ತು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ಕಳೆದ ರಾತ್ರಿ ಸಲಹೆನೀಡಿತ್ತುʼ ಎಂದು ತಿಳಿಸಿದ್ದಾರೆ.
ʼಆದಷ್ಟು ಬೇಗ ಪ್ರವೇಶ ಪಡೆಯುವ ಆತುರ ಸಾಲುಗಟ್ಟಿರುವ ಬಹಳಷ್ಟು ಜನರಲ್ಲಿದೆ, ಆದರೆ, ಅಪಾಯದ ಮುನ್ಸೂಚನೆ ವರದಿಯು ವಿಶ್ವಾಸಾರ್ಹ ಮೂಲದ್ದಾಗಿದೆ. ಅದು ಸತ್ಯಕ್ಕೆ ಹತ್ತಿರದ್ದಾಗಿದೆʼ ಎಂದು ಹೇಳಿದ್ದಾರೆ.
ದಾಳಿ ಭೀತಿ ಇದ್ದರೂ ಕಾಬೂಲ್ ವಿಮಾನ ನಿಲ್ದಾಣದ ಬಳಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸುತ್ತಿದ್ದಾರೆ.
ʼಬೆದರಿಕೆ ತೀವ್ರವಾಗಿದೆ ಎಂದು ಮಾತ್ರವೇ ನಾವು ಹೇಳಬಲ್ಲೆವು. ಅಲ್ಲಿರುವವರನ್ನು ರಕ್ಷಿಸಲು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ.ಮುಂದೆ ನಮಗೆ ಬರುವ ವರದಿಗಳನ್ನು ಆಧರಿಸಿ ಸಲಹೆಗಳೂ ಬದಲಾಗಬಹುದು. ಆದರೆ, ಅದಕ್ಕೆ ಯಾವುದೇ ಖಾತರಿ ಇಲ್ಲʼ ಎಂದು ಹೆಪ್ಪಿ ಎಚ್ಚರಿಸಿದ್ದಾರೆ.
ಅಫ್ಗಾನಿಸ್ತಾನದಲ್ಲಿರುವ ತನ್ನ ಸೈನ್ಯವನ್ನು ಹಿಂಪಡೆಯಲು ನಿಗದಿಯಾಗಿರುವ ಆಗಸ್ಟ್ 31ರ ಗಡುವನ್ನು ಪಾಲಿಸಲಾಗುವುದು ಎಂದು ಅಮೆರಿಕ ಸ್ಪಷ್ಟಪಡಿಸಿದೆ.
ಅಫ್ಗಾನಿಸ್ತಾನದ ಬೆಳವಣಿಗೆಗಳ ಕುರಿತು ಚರ್ಚಿಸಲು ಜಿ-7 ರಾಷ್ಟ್ರಗಳ ನಾಯಕರು ಬುಧವಾರ ಸಭೆ ನಡೆಸಿದ್ದರು. ಈ ವೇಳೆ ಸೈನ್ಯವನ್ನು ಹಿಂಪಡೆಯಲು ನಿಗದಿಯಾಗಿರುವ ಗಡುವನ್ನು ವಿಸ್ತರಿಸುವಂತೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರಿಗೆ ಮನವಿ ಮಾಡಲಾಗಿತ್ತು. ಆದರೆ, ನಿಗದಿತ ಗಡುವಿಗೆ ಬದ್ಧವಾಗಿರುವುದಾಗಿ ಬೈಡನ್ ಹೇಳಿದ್ದಾರೆ.
ಇವನ್ನೂ ಓದಿ
*ಕಾಬೂಲ್ ಏರ್ಪೋರ್ಟ್ ಮೇಲೆ ಹಿಡಿತ ಸಾಧಿಸುತ್ತಿರುವ ತಾಲಿಬಾನ್: ಪೆಂಟಗನ್
*ಅಫ್ಗಾನ್ಬೆಳವಣಿಗೆಗಳ ಬಗ್ಗೆ ಚರ್ಚಿಸಲು ಜಿ7 ಸಭೆ ಕರೆದ ಬ್ರಿಟನ್ ಪ್ರಧಾನಿ ಬೋರಿಸ್
*ಕಾಬೂಲ್: ಬೆದರಿಕೆಯ ನಡುವೆಯೂ ಹೆಚ್ಚಿನ ಜನರನ್ನು ಸ್ಥಳಾಂತರಿಸಿದ ಅಮೆರಿಕ
*ಹತ್ತಾರು ತಾಲಿಬಾನಿಗಳನ್ನು ಕೊಂದು ಪಂಜ್ಶೇರ್ ಪ್ರಾಂತ್ಯ ವಶಕ್ಕೆ ಪಡೆದ ವಿರೋಧಿ ಪಡೆ
*ತೆರವು: ಗಡುವು ಮೀರಿದರೆ ಎಚ್ಚರ
*ಅಫ್ಗಾನಿಸ್ತಾನದಲ್ಲಿ ಮಾನವೀಯತೆಗೆ ಬಹುದೊಡ್ಡ ಸವಾಲು ಎದುರಾಗಲಿದೆ; ಯುನಿಸೆಫ್
*ಅಫ್ಗನ್ಗೆ ಔಷಧ ಪರಿಕರ ಪೂರೈಕೆ ಇನ್ನಷ್ಟು ವಿಳಂಬ
*ತಾಲಿಬಾನ್ ಮೂಲಭೂತವಾದದ ಕಡುವಿರೋಧಿ ಪಾಪ್ ತಾರೆ ಅಫ್ಗಾನಿಸ್ತಾನದಿಂದ ಪಲಾಯನ
*ಅಫ್ಗನ್ ತೊರೆವ ಧಾವಂತ: 7 ಬಲಿ
*ಮಾಜಿ ಅಧ್ಯಕ್ಷ ಅಶ್ರಫ್ ಘನಿ ಅಫ್ಗಾನಿಸ್ತಾನಕ್ಕೆ ಮರಳಬಹುದು: ತಾಲಿಬಾನ್
*ಆಫ್ಗಾನ್ನಿಂದ ಸೇನೆ ಹಿಂತೆಗೆತ ತಾರ್ಕಿಕ ಮತ್ತು ಸರಿಯಾದ ನಿರ್ಧಾರ: ಬೈಡನ್
*ಅಫ್ಗಾನ್ ತಾಲಿಬಾನ್ ವಶವಾಗಲು ಪಾಕ್ ಗುಪ್ತಚರ ಸಂಸ್ಥೆ ಕೈವಾಡ: ಅಮೆರಿಕ ಸಂಸದ
*ಕಾಬೂಲ್ನಿಂದ ಜನರ ಸ್ಥಳಾಂತರ ಪ್ರಕ್ರಿಯೆ ಇನ್ನಷ್ಟು ತ್ವರಿತ: ಜೋ ಬೈಡನ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.