ದೇಶದಲ್ಲಿ ವಿದ್ಯುತ್ ಮತ್ತು ಎಲ್ಪಿಜಿ ಅನಿಲದ ಕೊರತೆಯೂ ಅಧಿಕವಾಗಿದೆ. ಹೀಗಾಗಿ ಪೆಟ್ರೋಲ್ ಬಂಕ್ಗಳಿಗೆ ಜನರು ಅಧಿಕವಾಗಿ ಬರತೊಡಗಿದ್ದು, ಮೈಲುದ್ದಕ್ಕೆ ವಾಹನಗಳು, ಕ್ಯಾನ್ ಹಿಡಿದುಕೊಂಡ ಜನರು ಸರದಿಯಲ್ಲಿ ನಿಲ್ಲುವಂತಾಗಿದೆ. ಏಪ್ರಿಲ್ ತಿಂಗಳ ಮಧ್ಯಭಾಗದಿಂದೀಚೆಗೆ ಪೆಟ್ರೋಲ್ ಬಂಕ್ಗಳಲ್ಲಿ ದ್ವಿಚಕ್ರ ವಾಹನಗಳಿಗೆ ಗರಿಷ್ಠ 4 ಲೀಟರ್, ತ್ರಿಚಕ್ರ ವಾಹನಗಳಿಗೆ 5 ಲೀಟರ್, ಕಾರು/ ಎಸ್ಯುವಿಗಳಿಗೆ 19.5 ಲೀಟರ್ ಇಂಧನ ನೀಡುವ ವ್ಯವಸ್ಥೆ ಜಾರಿಗೆ ಬಂದಿದೆ. ಆದರೆ ಗ್ರಾಹಕರು ಮತ್ತೆ ಮತ್ತೆ ಬಂಕ್ಗಳಿಗೆ ಬಂದು ಇಂಧನ ಸಂಗ್ರಹಿಸಿ ಇಡಲು ಮುಂದಾಗಿದ್ದರು. ಈ ಅವ್ಯವಸ್ಥೆಯನ್ನು ತಡೆಗಟ್ಟುವ ಸಲುವಾಗಿ ಈ ಪಡಿತರ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.