‘ಶಾಂಘೈ ಸಹಕಾರ ಒಕ್ಕೂಟವು (ಎಸ್ಸಿಒ) ಇದೇ 27 ಮತ್ತು 28ರಂದು ವಿದೇಶಾಂಗ ಸಚಿವರ ಸಭೆ ಆಯೋಜಿಸಿದೆ. ಇದರಲ್ಲಿ ಜೈಶಂಕರ್ ಪಾಲ್ಗೊಳ್ಳಲಿದ್ದಾರೆ. ಸೆಪ್ಟೆಂಬರ್ 15 ಮತ್ತು 16ರಂದು ಸಮರಖಂಡದಲ್ಲಿ ನಡೆಯುವ ಎಸ್ಸಿಒ ಸಮ್ಮೇಳನದ ಸಿದ್ಧತೆಗಳ ಕುರಿತು ಈ ಸಭೆಯಲ್ಲಿ ಚರ್ಚಿಸುವ ಸಾಧ್ಯತೆ ಇದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಟಣೆ ತಿಳಿಸಿದೆ.