ವಾಷಿಂಗ್ಟನ್: ರೈತರ ಸುಧಾರಣಾ ಕಾಯ್ದೆಯಿಂದ ಭಾರತದ ಕೃಷಿವಲಯ ಚೇತರಿಸಿಕೊಳ್ಳಲಿದ್ದು, ಕೃಷಿ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಮತ್ತು ಬೆಲೆ ದೊರೆಯಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಹೇಳಿದೆ. ಐಎಂಎಫ್ನ ಗ್ಯಾರಿ ರೈಸ್ ಪ್ರಕಾರ, ಹೊಸ ವ್ಯವಸ್ಥೆಗೆ ಬದಲಾಗುವಾಗ ಕೆಲವರಿಗೆ ಆರಂಭದಲ್ಲಿ ಸಮಸ್ಯೆಯಾಗಬಹುದು. ಅವರಿಗೆ ಸೂಕ್ತ ಸಾಮಾಜಿಕ ಭದ್ರತೆಯನ್ನು ಸರ್ಕಾರ ಒದಗಿಸಬೇಕು. ಉಳಿದಂತೆ, ರೈತರಿಗೆ ಇದರಿಂದ ಹೆಚ್ಚಿನ ಪ್ರಯೋಜನವಿದೆ, ಭಾರತ ಸರ್ಕಾರದ ಕ್ರಮ ಶ್ಲಾಘನೀಯ ಎಂದು ಗ್ಯಾರಿ ರೈಸ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.