ಡಿಸೆಂಬರ್ 25ರ ಒಪ್ಪಂದದ ಉಲ್ಲಂಘನೆ: ‘ನೇಪಾಳ ಪ್ರಧಾನಿ ಪ್ರಚಂಡ ಅವರು ಏಳು ಪಕ್ಷಗಳ ಸಮ್ಮಿಶ್ರ ಸರ್ಕಾರವನ್ನು ರಚಿಸುವ ವೇಳೆ ಮಾಡಿಕೊಂಡಿದ್ದ ಡಿಸೆಂಬರ್ 25ರ ಒಪ್ಪಂದವನ್ನು ಉಲ್ಲಂಘಿಸಿದ್ದು, ಸಿಪಿಎನ್–ಯುಎಂಎಲ್ಗೆ ದ್ರೋಹ ಎಸಗಿದ್ದಾರೆ. ಆದ್ದರಿಂದ ನಮ್ಮ ಪಕ್ಷವು ಸರ್ಕಾರವನ್ನು ತೊರೆಯಲು ನಿರ್ಧರಿಸಿದೆ. ಉಪಪ್ರಧಾನಿ ಹಾಗೂ ಹಣಕಾಸು ಸಚಿವ ಸಚಿವ ಬಿಷ್ಣು ಪೌದ್ಯಾಲ್, ವಿದೇಶಾಂಗ ಸಚಿವೆ ಬಿಮಲಾ ರಾಯ್ ಪೌದ್ಯಾಲ್ ಅವರು ಸೇರಿದಂತೆ ಸಿಪಿಎನ್–ಯುಎಂಎಲ್ನ ಮಂತ್ರಿಗಳು ಪ್ರಚಂಡ ಅವರಿಗೆ ರಾಜೀನಾಮೆ ಸಲ್ಲಿಸುವ ಪ್ರಕ್ರಿಯೆಯಲ್ಲಿದ್ದಾರೆ’ ಎಂದು ಬಿಷ್ಣು ರಿಜಲ್ ವಿವರಿಸಿದರು.