ಪಂಜಾಬ್ ಪ್ರಾಂತ್ಯದಲ್ಲಿ ಆಡಳಿತದಲ್ಲಿರುವ ಪಾಕಿಸ್ತಾನ್ ತೆಹರೀಕ್ ಇ ಇನ್ಸಾಫ್(ಪಿಟಿಐ), ಇಮ್ರಾನ್ ಖಾನ್ ಹತ್ಯೆ ಯತ್ನವು ಪೂರ್ವ ಯೋಜಿತ ಪಿತೂರಿ ಎಂದು ಆಪಾದಿಸಿದೆ. ಇದೀಗ ಪ್ರಧಾನಿ ಶೆಹಬಾಜ್ ಶರೀಫ್ ಅವರ ಮುಸ್ಲೀಂ ಲೀಗ್ ನವಾಜ್ (ಪಿಎಂಎಲ್–ಎನ್) ನೇತೃತ್ವದ ಮೈತ್ರಿಕೂಟ ಒಕ್ಕೂಟದ ಸರ್ಕಾರವು ಜಂಟಿ ತನಿಖೆಗೆ ಆದೇಶಿಸಿದೆ. ಈ ಮೂಲಕ ಕೃತ್ಯದ ಹಿಂದಿನ ನೈಜ ಉದ್ದೇಶವು ವಿಶ್ವಾಸಾರ್ಹ ರೀತಿಯಲ್ಲಿ ಹೊರಬೀಳಲಿದೆ ಎಂದಿದೆ.