ನವದೆಹಲಿ: ಹತ್ತು ಭಾರತೀಯ ಪ್ರಜೆಗಳು ಸೇರಿದಂತೆ ಒಟ್ಟು 104 ಜನರನ್ನು ಭಾರತವು ವಿಶೇಷ ವಿಮಾನದ ಮೂಲಕ ಶುಕ್ರವಾರ ಕಾಬೂಲ್ನಿಂದ ದೆಹಲಿಗೆ ಸ್ಥಳಾಂತರಿಸಿದೆ.
‘ದೇವಿ ಶಕ್ತಿ’ ಕಾರ್ಯಾಚರಣೆ ಅಡಿಯಲ್ಲಿ ಭಾರತವು ವಿಶೇಷ ವಿಮಾನವನ್ನು ವ್ಯವಸ್ಥೆಗೊಳಿಸಿತ್ತು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿದ್ದಾರೆ.
10 ಭಾರತೀಯರು, 94 ಅಫ್ಗಾನಿಸ್ತಾನಿಯರನ್ನು ಸ್ಥಳಾಂತರ ಮಾಡಲಾಗಿದೆ. ಇವರಲ್ಲಿ 9 ಮಕ್ಕಳು ಹಾಗೂ ಮೂರು ಶಿಶುಗಳು ಸೇರಿವೆ.
ವಿಮಾನವು ಗುರುಗ್ರಂಥ ಸಾಹಿಬ್ ಮತ್ತು ಹಿಂದೂ ಧಾರ್ಮಿಕ ಗ್ರಂಥಗಳ ಮೂರು ಪ್ರತಿಗಳನ್ನು ಕಾಬೂಲ್ನ ಪುರಾತನ ಅಸಾಮೈ ಮಂದಿರದಿಂದ ತಂದಿದೆ. ಭಾರತ ಸರ್ಕಾರ ಮತ್ತು ದೆಹಲಿಯಲ್ಲಿನ ಅಫ್ಗನ್ ರಾಯಭಾರ ಕಚೇರಿ ಸಹಯೋಗದಲ್ಲಿ ಈ ವಿಶೇಷ ವಿಮಾನವನ್ನು ವ್ಯವಸ್ಥೆ ಮಾಡಲಾಗಿತ್ತು.