‘ಆಪರೇಷನ್ ದೇವಿ ಶಕ್ತಿ ಕಾರ್ಯಾಚರಣೆ ಭಾಗವಾಗಿ ಭಾರತೀಯ ವಾಯುಪಡೆ ವಿಮಾನವು ಕಾಬೂಲ್ನಿಂದ 24 ಭಾರತೀಯರು ಮತ್ತು 11 ನೇಪಾಳಿಗರನ್ನು ಹೊತ್ತುಕೊಂಡು ದೆಹಲಿಗೆ ಸಾಗುತ್ತಿದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಬೆಳಿಗ್ಗೆ ಟ್ವೀಟ್ ಮಾಡಿದ್ದರು. ಕಳೆದ ಎರಡು ದಿನಗಳಿಂದ ಕಾಬೂಲ್ ವಿಮಾನ ನಿಲ್ದಾಣದ ಸುತ್ತಮುತ್ತಲೂ ಭದ್ರತಾ ಪರಿಸ್ಥಿತಿಯು ಮತ್ತಷ್ಟು ಹದಗೆಟ್ಟಿರುವ ಕಾರಣ ಅಫ್ಗನ್ನರು ಮತ್ತು ಇತರರು ಇಲ್ಲಿಗೆ ತಲುಪಲಾಗುತ್ತಿಲ್ಲ ಎಂದು ದೆಹಲಿಯನ್ನು ತಲುಪಿದ ಭಾರತೀಯರು ಅಲ್ಲಿನ ಪರಿಸ್ಥಿತಿ ತೆರೆದಿಟ್ಟರು.