ಆಗಸ್ಟ್ 21ರಂದು ಕ್ಯಾಲಿಫೋರ್ನಿಯಾದ ಗ್ರಿಮ್ಮರ್ ಬುಲೆವಾರ್ಡ್ನ ಟ್ಯಾಕೊ ಬೆಲ್ನಲ್ಲಿ ಭಾರತೀಯ ಮೂಲದ ಕೃಷ್ಣನ್ ಜಯರಾಮನ್ ಅವರನ್ನು ಸಿಂಗ್ ತೇಜಿಂದರ್ ಎಂಬುವರು ಜನಾಂಗೀಯವಾಗಿ ನಿಂದಿಸಿದ್ದಾರೆ. ‘ಕೊಳಕು ಹಿಂದೂ’, ‘ಅಹಸ್ಯ ತರಿಸುವ ನಾಯಿ’ ಎಂದು ಹೀಗಳೆದಿದ್ದಾರೆ ಎಂದು ಎನ್ಬಿಸಿ ನ್ಯೂಸ್ ವರದಿ ಮಾಡಿದೆ. ಜನಾಂಗೀಯ ನಿಂದನೆಯ ವಿಡಿಯೊವನ್ನು ಜಯರಾಮನ್ ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ.