ಕಠ್ಮಂಡು: ನೇಪಾಳದ ಮೌಂಟ್ ಮಾನಾಸ್ಲು ಪರ್ವತದಲ್ಲಿ ಸೋಮವಾರ ಸಂಭವಿಸಿದ ಭಾರಿ ಹಿಮಪಾತದಿಂದಾಗಿ ಭಾರತದ ಪರ್ವತಾರೋಹಿ ಬಲ್ಜೀತ್ ಕೌರ್ ಸಹಿತ 12 ಮಂದಿ ಗಾಯಗೊಂಡಿದ್ದಾರೆ.
ಗಾಯಗೊಂಡವರ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ. ಕೌರ್ ಮತ್ತು ಅವರ ಜತೆಗಿದ್ದ ಶೆರ್ಪಾ ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿಗಳಿಂದ ತಿಳಿದುಬಂದಿದೆ.
ಮೌಂಟ್ ಮಾನಾಸ್ಲು ಪರ್ವತ ಜಗತ್ತಿನ ಎಂಟನೇ ಅತಿ ಎತ್ತರದ ಪರ್ವತವಾಗಿದ್ದು, ಜಗತ್ತಿನ ಐದು ಅತ್ಯಂತ ಅಪಾಯಕಾರಿ ಪರ್ವತಗಳಲ್ಲಿ ಇದೂ ಒಂದಾಗಿದೆ. ಈ ಪರ್ವತ ಏರಲು ಹೊರಟ 53 ಮಂದಿ ಇದುವರೆಗೆ ಮೃತಪಟ್ಟಿದ್ದಾರೆ.