ವಾಷಿಂಗ್ಟನ್: ಮಹಾತ್ಮಗಾಂಧಿಯವರ 151ನೇ ಜನ್ಮದಿನಾಚರಣೆ ಅಂಗವಾಗಿ ಇಲ್ಲಿನ ಭಾರತೀಯ ರಾಜತಾಂತ್ರಿಕ ಕೇಂದ್ರದಲ್ಲಿ ಸ್ಪೂರ್ತಿದಾಯಕ ಸಂಗೀತದ ಮೂಲಕ ರಾಷ್ಟ್ರಪಿತನಿಗೆ ಗೌರವಸಲ್ಲಿಸಲಾಯಿತು.
ಈ ವಿಶ್ವದಲ್ಲಿರುವ ಸಂಕಷ್ಟಗಳ ಪರಿಹಾರಕ್ಕಾಗಿ, ಸಂಕಷ್ಟದಲ್ಲಿರುವ ಜನರಿಗೆ ದಾರಿತೋರುವುದಕ್ಕಾಗಿ ಗಾಂಧೀಜಿಯವರಂತಹ ಮಹಾತ್ಮ ಮತ್ತೆ ಹುಟ್ಟಿಬರಬೇಕೆಂದು ಪ್ರಾರ್ಥಿಸಲಾಯಿತು.
2008ರ ಬ್ಯಾಚ್ನ ಐಎಫ್ಎಸ್ ಅಧಿಕಾರಿ ಶಂಭು ಹಕ್ಕಿ ಅವರು ಸಂಯೋಜಿಸಿ, ಹಾಡಿದ ‘ಬಾಪು ಮೇರೆ: ಎ ಮ್ಯುಸಿಕಲ್ ಟ್ರಿಬ್ಯೂಟ್ ಟು ಮಹಾತ್ಮಗಾಂಧಿ‘ ಹಿಂದಿ ದೃಶ್ಯ ಗೀತೆಯನ್ನು ಭಾರತೀಯ ರಾಯಭಾರಿ ಕೇಂದ್ರದಲ್ಲಿ ಪ್ರದರ್ಶಿಸಲಾಯಿತು.
‘ನಮ್ಮ ಬಾಪು, ದಯವಿಟ್ಟು ಈ ಜಗಕ್ಕೆ ಮತ್ತೆ ಬನ್ನಿ. ಸಂಕಷ್ಟದ ಸಮಯದಲ್ಲಿ ನಮಗೆ ದಾರಿ ತೋರಿಸಿ. ಸತ್ಯದ ದಾರಿಯಲ್ಲಿ ಕರೆದೊಯ್ಯಿರಿ. ಸತ್ಯ ಮತ್ತು ಅಹಿಂಸೆಯನ್ನು ಬೋಧಿಸಿ. ನೀವೊಬ್ಬ ಶಾಂತಿ ದೂತ‘ ಎಂದು ಹಿಂದಿ ಗೀತೆಯ ಸಾಹಿತ್ಯವನ್ನು ಇಂಗ್ಲಿಷ್ಗೆ ಅನುವಾದಿಸಲಾಯಿತು.