ಸಭೆಯನ್ನು ಉದ್ದೇಶಿಸಿ ಮಾತನಾಡಿದ ಡೆಪ್ಯುಟಿ ಹೈಕಮಿಷನರ್ ವಿನೋದ್ ಕೆ.ಜಾಕೋಬ್,‘ಭಾರತ ಅನುಸರಿಸುತ್ತಿರುವ ‘ನೆರೆ ರಾಷ್ಟ್ರಗಳು ಮೊದಲು’ ನೀತಿ ಹಾಗೂ ‘ಸಾಗರ್’ ಕಾರ್ಯಕ್ರಮದಡಿ ಉಭಯ ದೇಶಗಳಿಗೆ ಪ್ರಯೋಜನವಾಗುವಂತಹ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಂಟಿಯಾಗಿ ಜಾರಿಗೊಳಿಸುವುದು, ಭಾರತ ಹಾಗೂ ಶ್ರೀಲಂಕಾ ಪ್ರಜೆಗಳ ಆಶೋತ್ತರಗಳಿಗೆ ಸ್ಪಂದಿಸುವುದು ಸಹ ಮುಖ್ಯ’ ಎಂದರು.