ದುರಂತ ನಡೆಯುವ ದಿನದಂದು ಆಕೆ ಕೆಲಸಕ್ಕೆ ಹೋಗದಂತೆ ತನ್ನ ಗಂಡನನ್ನು ಬೇಡಿಕೊಂಡಿದ್ದಳು ಮತ್ತು ತಾನು ಅನಾರೋಗ್ಯದಿಂದ ಬಳಲುತ್ತಿರುವುದಾಗಿ ಸ್ನೇಹಿತರಿಗೂ ಕರೆ ಮಾಡಿ ತಿಳಿಸಿದ್ದರು. ಸಂಜೆ 4 ಗಂಟೆ ಸುಮಾರಿಗೆ ನೆರೆಹೊರೆಯವರು ಮಿಚಮ್ನ ಮೊನಾರ್ಕ್ ಪೆರೇಡ್ನಲ್ಲಿರುವ ಫ್ಲ್ಯಾಟ್ಗೆ ತೆರಳಿದಾಗ ಶಿವನಾಥಂ ಅವರ ಹೊಟ್ಟೆಯಲ್ಲಾಗಿರುವ ಇರಿತದ ಗಾಯಗಳನ್ನು ಗಮನಿಸಿದ್ದಾರೆ. ಅಲ್ಲದೆ ಹಾಸಿಗೆ ಮೇಲೆ ಮಲಗಿದ್ದ ಸಯಾಗಿಯ ಕುತ್ತಿಗೆ, ಎದೆ ಮತ್ತು ಹೊಟ್ಟೆ ಭಾಗದಲ್ಲಿ ಹಲವಾರು ಬಾರಿ ಇರಿಯಲಾಗಿತ್ತು.