ಮರದ ದೋಣಿ ತೂತಾಗಿದ್ದು, ನೀರು ಒಳಗೆ ಬರುತ್ತಿದೆ, ಎಂಜಿನ್ ಸಹ ಕೆಟ್ಟು ಹೋಗಿದೆ. ತೀವ್ರ ಚಳಿಯಲ್ಲೇ, ದೋಣಿ ಮುಳುಗುವ ಭೀತಿಯಲ್ಲಿ ನಿರಾಶ್ರಿತರಿದ್ದಾರೆ. ಹೀಗಾಗಿ ದೋಣಿಯನ್ನು ದಡಕ್ಕೆ ಬರಲು ಅವಕಾಶ ನೀಡಬೇಕು ಎಂದು ವಿಶ್ವಸಂಸ್ಥೆಯ ನಿರಾಶ್ರಿತರಿಗಾಗಿರುವ ಹೈಕಮಿಷನರ್ ಕಚೇರಿ (ಯುಎನ್ಎಚ್ಸಿಆರ್) ಕೋರಿಕೆ ಸಲ್ಲಿಸಿತ್ತು. ಆದರೆ ಇದನ್ನು ನಿರಾಕರಿಸಿರುವ ಇಂಡೊನೇಷ್ಯಾದ ಅಧಿಕಾರಿಗಳು, ನೌಕಾಪಡೆ ಮತ್ತು ಸ್ಥಳೀಯರ ನೆರವು ನೀಡಿ ದೋಣಿಯ ಎಂಜಿನ್ ಸರಿಪಡಿಸುವುದಕ್ಕೆ ವ್ಯವಸ್ಥೆ ಮಾಡಿದ್ದಾರೆ.