ಢಾಕಾ: ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿನ ಇಸ್ಕಾನ್ ರಾಧಾಕೃಷ್ಣ ದೇವಸ್ಥಾನದ ಮೇಲೆ ಸುಮಾರು 200 ಜನರಿದ್ದ ಗುಂಪೊಂದು ದಾಳಿ ನಡಸಿದ್ದು, ಭಕ್ತರ ಮೇಲೆ ಹಲ್ಲೆ ನಡೆಸಿ ದೇವಸ್ಥಾನದಲ್ಲಿ ದಾಂದಲೆ ಮಾಡಿದೆ.
ಗುರುವಾರ ಘಟನೆ ನಡೆದಿದೆ. ಗುರುಪೌರ್ಣಿಮೆ ಹಿನ್ನೆಲೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಇದೇ ವೇಳೆ ಗುಂಪು ದಾಳಿ ನಡೆದಿದೆ ಎಂದು ಕೋಲ್ಕತ್ತ ಇಸ್ಕಾನ್ನ ಉಪಾಧ್ಯಕ್ಷ ರಾಧಾರಮಣ್ ದಾಸ್ ಹೇಳಿದ್ದಾರೆ.
ಎನ್ಡಿಟಿವಿ ವರದಿ ಪ್ರಕಾರ, ದಾಂದಲೆಯಿಂದಾಗಿ ಮೂವರು ಭಕ್ತರಿಗೆ ಗಾಯವಾಗಿದೆ.