ಟೋಕಿಯೊ: ಕೋವಿಡ್ ಒಡ್ಡಿರುವ ಹೊಸ ಸವಾಲುಗಳು, ತೈವಾನ್ ಮೇಲಿನ ಚೀನಾದ ಆಕ್ರಮಣಕಾರಿ ಕ್ರಮಗಳನ್ನು ಭಾರತಮತ್ತುಜಪಾನ್ ಸಂಘಟಿತವಾಗಿಎದುರಿಸಬೇಕಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಗುರುವಾರ ಕರೆ ನೀಡಿದರು.
ಭದ್ರತೆ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಉಭಯ ದೇಶಗಳ ಸಹಕಾರ ವೃದ್ಧಿಸುವಕುರಿತು ಭಾರತ ಮತ್ತು ಜಪಾನ್ನ ದೇಶಗಳ ವಿದೇಶಾಂಗ ಸಚಿವರ ಸಭೆಯಲ್ಲಿ ಚರ್ಚಿಸಲಾಯಿತು ಎಂದು ಅವರು ಹೇಳಿದರು.
ಜೈಶಂಕರ್ ಅವರು ಜಪಾನ್ನ ಮಾಜಿ ಪ್ರಧಾನಿ ಶಿಂಜೊ ಅಬೆ ಅವರಿಗೆ ಸಂತಾಪ ಸೂಚಿಸಿದರು.ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರೂ ಸಭೆಯಲ್ಲಿ ಭಾಗವಹಿಸಿದ್ದರು.