ಜಕಾರ್ತ: ಮ್ಯಾನ್ಮಾರ್ನಲ್ಲಿ ಫೆಬ್ರುವರಿಯಲ್ಲಿ ನಡೆದ ಸೇನಾ ದಂಗೆಯನ್ನು ವಿರೋಧಿಸಲು ನಾಗರಿಕ ಅಸಹಕಾರ ಚಳವಳಿಗೆ ಸೇರ್ಪಡೆಗೊಂಡಿದ್ದಕ್ಕಾಗಿ 1.25 ಲಕ್ಷಕ್ಕೂ ಹೆಚ್ಚು ಶಾಲಾ ಶಿಕ್ಷಕರನ್ನು ಸೇನಾಧಿಕಾರಿಗಳು ಅಮಾನತು ಮಾಡಿದ್ದಾರೆ ಎಂದು ಶಿಕ್ಷಕರ ಒಕ್ಕೂಟದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮ್ಯಾನ್ಮರ್ನಲ್ಲಿ ಒಂದು ದಶಕದಿಂದ ಸರ್ಕಾರ ಮತ್ತು ಸೇನೆಯ ಮಧ್ಯೆ ನಿರಂತರವಾಗಿ ಸಂಘರ್ಷ ನಡೆಯುತ್ತಿದೆ. ಶಾಲಾ ವರ್ಷ ಪ್ರಾರಂಭವಾಗುವುದಕ್ಕೆ ಕೆಲವು ದಿನಗಳ ಬಾಕಿ ಇರುವಾಗ ಶಿಕ್ಷಕರ ಅಮಾನತು ಆದೇಶ ಪ್ರಕಟಿಸಲಾಗಿದೆ.
ಶನಿವಾರದ ವೇಳೆಗೆ ಒಟ್ಟು 1,25,900 ಶಾಲಾ ಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ ಎಂದು ಶಿಕ್ಷಕರ ಒಕ್ಕೂಟದ ಅಧಿಕಾರಿ ತಿಳಿಸಿದ್ದಾರೆ.
‘ಇದು ಕೇವಲ ಕರ್ತವ್ಯಕ್ಕೆ ಹಾಜರಾಗುವಂತೆ ಜನರನ್ನು ಬೆದರಿಸುವ ತಂತ್ರವಾಗಿದೆ. ಸೇನೆಯು ಜನರ ಮೇಲೆ ನಡೆಸುತ್ತಿರುವ ದೌಜರ್ನ್ಯ ನಿಲ್ಲಿಸದಿದ್ದರೆ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತಷ್ಟು ಹದಗೆಡುತ್ತದೆ’ ಎಂದು ಶಿಕ್ಷಕರೂ ಆಗಿರುವ ಅಧಿಕಾರಿ ಹೇಳಿದರು.