ಈ ಸಂಬಂಧ ಶುಕ್ರವಾರ ಟ್ವೀಟ್ ಮಾಡಿರುವ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು, 'ಈಶಾನ್ಯ ಭಾಗದ ಸುಮಿ ನಗರದಲ್ಲಿದ್ದ ಭಾರತೀಯ ವಿದ್ಯಾರ್ಥಿಗಳನ್ನು ರಕ್ಷಿಸುವುದು ಸವಾಲಿನ ಕೆಲಸವೇ ಆಗಿತ್ತು. ಆದರೆ ಉಕ್ರೇನ್, ಉಕ್ರೇನ್ನ ಸುತ್ತಮುತ್ತಲ ದೇಶಗಳಾದ ರೊಮಾನಿಯಾ, ಹಂಗೆರಿ, ಪೋಲೆಂಡ್, ಸ್ಲೊವೇಕಿಯಾ ಹಾಗೂ ಮೊಲ್ಡೊವಾ ದೇಶಗಳು ನೀಡಿದ ಸಹಕಾರದಿಂದಾಗಿ ಅಪರೇಷನ್ ಗಂಗಾ ಕಾರ್ಯಾಚರಣೆ ಮೂಲಕ ಭಾರತೀಯರನ್ನು ಸ್ವದೇಶಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದ್ದೇವೆ. ಇದಕ್ಕಾಗಿ ಈ ಎಲ್ಲಾ ದೇಶಗಳಿಗೂ ಕೃತಜ್ಞತೆಗಳು' ಎಂದು ಹೇಳಿದ್ದಾರೆ.