ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಸ್ಪರ್ಧಿಗಳ ವಿರುದ್ಧ ರ್‍ಯಾಲಿಗಳು ಮುಂದುವರಿಯುತ್ತವೆ: ಇಮ್ರಾನ್‌ ಖಾನ್‌

Last Updated 28 ಆಗಸ್ಟ್ 2022, 15:13 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌:ನಾಶಕಾರಿ ಪ್ರವಾಹದಿಂದಾಗಿ ಪಾಕಿಸ್ತಾನವು ತೀವ್ರವಾಗಿ ಹಾನಿಗೊಳಗಾದಾಗಲೂ, ತನ್ನ ಪ್ರತಿಸ್ಪರ್ಧಿಗಳ ವಿರುದ್ಧ ರಾಜಕೀಯ ರ್‍ಯಾಲಿಗಳು ಮುಂದುವರಿಯುತ್ತದೆ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

ಈ ಹೋರಾಟವು ‘ಹಖೀಕಿ ಅಜಾದಿ’ಗಾಗಿ (ನೈಜ ಸ್ವಾತಂತ್ರ್ಯ) ಎಂದು ಇಮ್ರಾನ್‌ ಖಾನ್‌ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪಂಜಾಬ್ ಪ್ರಾಂತ್ಯದ ಝೇಲಂ ಜಿಲ್ಲೆಯಲ್ಲಿ ಶನಿವಾರ ನಡೆದ ರ್‍ಯಾಲಿಯಲ್ಲಿ ಮಾತನಾಡಿದ ಇಮ್ರಾನ್‌ ಅವರು, ‘30 ವರ್ಷಗಳಿಂದ ದೇಶವನ್ನು ಲೂಟಿ ಮಾಡಿದ ಈ ಕಳ್ಳರ ವಿರುದ್ಧ ನಾನು ಯುದ್ಧ ಮಾಡುತ್ತಿದ್ದೇನೆ. ಕಾನೂನಿನ ಪರಮಾಧಿಕಾರಕ್ಕಾಗಿ ಹಾಗೂ ಇಸ್ಲಾಮಿಕ್ ಕಲ್ಯಾಣ ರಾಜ್ಯವಾಗಬೇಕಿದ್ದ ದೇಶಕ್ಕಾಗಿ ಹೋರಾಡುತ್ತಿದ್ದೇನೆ’ ಎಂದು ಅವರು ಹೇಳಿರುವುದಾಗಿ ಎಂದು ಡಾನ್ ಪತ್ರಿಕೆ ಭಾನುವಾರ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT