150 ಪ್ರಯಾಣಿಕರಿದ್ದ ಇಂಡಿಯನ್ ಏರ್ಲೈನ್ಸ್ ಫ್ಲೈಟ್ 814 ಅಪಹರಣದ ಸಂದರ್ಭದಲ್ಲಿ, ಜೈಷ್ –ಇ–ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್, ಸಯೀದ್ ಶೇಖ್ ಹಾಗೂ ಮುಷ್ತಾಕ್ ಅಹ್ಮದ್ ಜರ್ಗಾರ್ ಅವರನ್ನು ಭಾರತವು ಬಿಡುಗಡೆಗೊಳಿಸಿತ್ತು. ಇದಾದ ಮೂರು ವರ್ಷಗಳಲ್ಲೇ ಡೇನಿಯಲ್ ಹತ್ಯೆ ನಡೆದಿತ್ತು. ವಿದೇಶದ ಪ್ರವಾಸಿಗರನ್ನು ಅಪಹರಿಸಿದ ಪ್ರಕರಣದಲ್ಲಿ ಸಯೀದ್ ಶೇಖ್ ಭಾರತದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ.