‘ಬುದ್ಧ ದೊಡ್ಡ ರಾಜ್ಯವನ್ನು ಹಾಗೂ ಎಲ್ಲ ಸವಲತ್ತುಗಳನ್ನು ತ್ಯಾಗ ಮಾಡಿದ್ದರು. ಸಾಮಾನ್ಯ ಶಿಶುವಾಗಿ ಬುದ್ಧ ಜನಿಸಿರಲಿಲ್ಲ. ತ್ಯಾಗ ಎಷ್ಟು ಮಹತ್ವದ್ದು ಎಂಬುದನ್ನು ನಾವು ಅರಿಯುವಂತೆ ಮಾಡಿದ ಮಹಾನ್ ವ್ಯಕ್ತಿ ಬುದ್ಧ. ಅವರು ಕಾಡುಗಳಲ್ಲಿ ನಡೆದರು, ಧ್ಯಾನ ಮಾಡಿದರು, ಆತ್ಮಾವಲೋಕನ ಮಾಡಿದರು, ಜ್ಞಾನ ಪಡೆದರು. ಆ ಬಳಿಕವೂ ತಾವು ಜನರ ರಕ್ಷಕನೆಂದು ಹೇಳಿಕೊಳ್ಳಲಿಲ್ಲ. ತಮ್ಮದೇ ಆದ ದಾರಿಯನ್ನು ಜಗತ್ತಿಗೆ ತೋರಿದರು’ ಎಂದು ಪ್ರಧಾನಿ ಹೇಳಿದರು.