ದುಷ್ಕರ್ಮಿಯು, ಪಥಸಂಚಲನ ವೀಕ್ಷಿಸಲು ಬಂದಿದ್ದ ಜನರ ಗುಂಪಿನ ಮೇಲೆಕಟ್ಟಡವೊಂದರ ಮೇಲ್ಛಾವಣಿಯಿಂದ ದಾಳಿ ನಡೆಸಿದ್ದಾನೆ. ಈ ವೇಳೆ ಆತಂಕಗೊಂಡ ಜನರು ಪ್ರಾಣ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಿದ್ದಾರೆ.ದಾಳಿ ವೇಳೆಆರು ಮಂದಿ ಮೃತಪಟ್ಟು, ಕನಿಷ್ಠ 48 ಮಂದಿ ಗಾಯಗೊಂಡಿದ್ದಾರೆ.ಮಕ್ಕಳೂ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವರ ಸ್ಥಿತಿಚಿಂತಾಜನಕವಾಗಿದೆ ಎಂದುತುರ್ತು ಸೇವೆ ಅಧಿಕಾರಿಗಳು ತಿಳಿಸಿದ್ದಾರೆ.