2019ರಲ್ಲಿ ನಾರಾಯಣ್ ಸೇವಾ ಸಂಸ್ಥಾನವು ಜಾರ್ಜಿಯಾ, ಅಟ್ಲಾಂಟಾದಲ್ಲಿ ‘ಸೇವಾ ಪ್ರಾಜೆಕ್ಟ್’ ಹೆಸರಿನಡಿಯಲ್ಲಿ ಅಭಿಯಾನ ಆರಂಭಿಸಿತ್ತು. ಈ ಅಭಿಯಾನದಡಿ ಮಕ್ಕಳು ಸಮುದಾಯ ಸೇವೆ ಮಾಡುವ ಮೂಲಕ ಹಣವನ್ನು ಸಂಗ್ರಹಿಸಿದರು. ಅವರು ಸೋಡಾ, ಚಹಾ, ಸಮೋಸಾ ಮತ್ತು ಪಾಪ್ಕಾರ್ನ್ಗಳನ್ನು ಮಾರಾಟ ಮಾಡಿದ್ದರು. ಜತೆಗೆ, ‘ಸೇವಾ ಪ್ರಾಜೆಕ್ಟ್’ ಬಗ್ಗೆಯೂ ಜನರಿಗೆ ವಿವರಿಸಿದ್ದರು ಎಂದು ಎನ್ಎಸ್ಎಸ್ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ.