ಅಂತರರಾಷ್ಟ್ರೀಯ ಸಮುದಾಯದ ಸಹಾಯದ ಅನುಪಸ್ಥಿತಿಯಲ್ಲಿ, ನಾಗರಿಕರು, ತಮ್ಮ ರಕ್ಷಣೆಗಾಗಿ ‘ನಾಗರಿಕ ರಕ್ಷಣಾ ಪಡೆ‘ಗಳನ್ನು ರಚಿಸಿಕೊಂಡು, ತಾವೇ ತಯಾರಿಸಿಕೊಂಡಿರುವ ಶಸ್ತ್ರಾಸ್ತ್ರಗಳನ್ನು ಹೋರಾಟಕ್ಕೆ ಬಳಸುತ್ತಿದ್ದಾರೆ. ಪ್ರಜಾಪ್ರಭುತ್ವದ ಏಕತೆಯ ಆಧರದ ಮೇಲೆ ಸ್ಥಳೀಯ ಸಶಸ್ತ್ರ ಸಂಘಟನೆಗಳಿಂದ ಸೇನಾ ತರಬೇತಿ ಪಡೆಯುತ್ತಿದ್ದಾರೆ. ಹಲವು ದಶಕಗಳಿಂದ ಶಸ್ತ್ರಾಸ್ತ್ರ ಸಂಘರ್ಷವನ್ನೇ ಕಾಣದ ದೇಶದ ವಿವಿಧ ವಲಯಗಳು ಕ್ರಮೇಣ ಅಶಾಂತಿಯ ತಾಣಗಳಾಗುತ್ತಿವೆ ಎಂದು ಹೇಳಿದ್ದಾರೆ.