ಕೊಲಂಬೊ: ಶ್ರೀಲಂಕಾದಿಂದ ಪಲಾಯನ ಮಾಡಿದ್ದ ಪದಚ್ಯುತ ಅಧ್ಯಕ್ಷಗೊಟಬಯ ರಾಜಪಕ್ಸೆ ಅವರು ಏಳು ವಾರಗಳ ನಂತರ ಸ್ವದೇಶಕ್ಕೆ ವಾಪಸಾಗಿದ್ದು, ಸದ್ಯ ಅವರಿಗೆ ಸಾಂವಿಧಾನಿಕ ವಿನಾಯಿತಿಗಳ ರಕ್ಷಣೆ ಇಲ್ಲ. 12 ವರ್ಷಗಳ ಹಿಂದೆ ಇಬ್ಬರು ಯುವ ರಾಜಕೀಯ ಹೋರಾಟಗಾರರನ್ನು ಕಣ್ಮರೆಗೊಳಿಸಿದ ಸಂಬಂಧ ಈಗ ಅವರು ಕಾನೂನು ಕ್ರಮ ಎದುರಿಸಬೇಕಾಗಬಹುದು ಎಂದು ವಕೀಲರು ಶನಿವಾರ ತಿಳಿಸಿದರು.