‘ಜನರ ಆರೋಗ್ಯ ಹೇಗೆ ಕಾಪಾಡುವುದು ಎನ್ನುವ ಮೂಲಭೂತ ಪ್ರಶ್ನೆಯು ಪ್ರಸ್ತುತ ಇರುವ ಕೋವಿಡ್–19 ಪಿಡುಗು ಹಾಗೂ ಹವಾಮಾನ ವೈಪರಿತ್ಯದಿಂದ ಉದ್ಭವಿಸಿದೆ. ಸುಸ್ಥಿರತೆ, ಸಮಾನತೆ ಹಾಗೂ ಸಾಮಾಜಿಕ ನ್ಯಾಯದ ವಿಚಾರದಲ್ಲಿ ದೃಢ ನಿಲುವನ್ನು ಯುವಜನರು ಬಯಸುತ್ತಿದ್ದಾರೆ. ಸ್ವಚ್ಛ ಇಂಧನ, ಹವಾಮಾನ ವೈಪರಿತ್ಯದ ವಿರುದ್ಧ ಕ್ರಮ ತೆಗೆದುಕೊಳ್ಳಲು ಪ್ರಸ್ತುತ ದಿಟ್ಟತನದ ನಾಯಕತ್ವದ ಅವಶ್ಯಕತೆ ಇದ್ದು, ಭಾರತವು ಈ ನೇತೃತ್ವ ವಹಿಸಬೇಕು’ ಎಂದು ‘ದಿ ಎನರ್ಜಿ ಆ್ಯಂಡ್ ರಿಸೋರ್ಸ್ ಇನ್ಸ್ಟಿಟ್ಯೂಟ್’(ಟಿಇಆರ್ಐ) ಆಯೋಜಿಸಿದ್ದ 19ನೇ ದರ್ಬಾರಿ ಸೇಠ್ ಸಂಸ್ಮರಣಾ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.