ಕೋವಿಡ್ ಸಂಬಂಧಿತ ನಿರ್ಬಂಧಗಳನ್ನು ಹಂತ ಹಂತವಾಗಿ ಸಡಿಲಗೊಳಿಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆ ಎಂದು ಬಣ್ಣಿಸಲಾಗಿದೆ. ಶ್ವೇತಭವನದ ಸಹಾಯಕ ಪತ್ರಿಕಾ ಕಾರ್ಯದರ್ಶಿ ಕೆವಿನ್ ಮುನೊಜ್ ಈ ಕುರಿತು ಟ್ವೀಟ್ ಮಾಡಿದ್ದಾರೆ.
ಪ್ರಯಾಣ ಸಂಬಂಧಿತ ಉದ್ಯಮದ ಬಲವಾದ ಲಾಬಿಯ ಪರಿಣಾಮ ಈ ವಾರಾಂತ್ಯದಲ್ಲಿ ಕೋವಿಡ್ ಕಡ್ಡಾಯ ಪರೀಕ್ಷೆ ನಿರ್ಬಂಧ ರದ್ದಾಗಲಿದೆ ಎಂದು ಮಾಧ್ಯಮಗಳು ಈ ಬೆಳವಣಿಗೆಯನ್ನು ವ್ಯಾಖ್ಯಾನಿಸಿವೆ.